ಭಾರತೀಯ ಸಂಗೀತಕ್ಕಿದೆ ಆಲ್ಜೀಮರ್ಸ್ ಗುಣಪಡಿಸುವ ಶಕ್ತಿ

ಭಾರತೀಯ ಸಂಗೀತಕ್ಕಿದೆ ಆಲ್ಜೀಮರ್ಸ್ ಗುಣಪಡಿಸುವ ಶಕ್ತಿ: ಅಮೆರಿಕ ಸಂಶೋಧಕರು

ಸಾಮಾನ್ಯವಾಗಿ ಹಿರಿಯರಲ್ಲಿ ಕಂಡು ಬರುವ ಮರವಿನ ಕಾಯಿಲೆ ನಿವಾರಿಸಲು ಸರಳ ಧ್ಯಾನಾಭ್ಯಾಸ ಅಥವಾ ಸಂಗೀತ ಚಿಕಿತ್ಸೆ ಸಹಕಾರಿಯಾಗುತ್ತದೆ ಎಂದು ಅಮೆರಿಕದ ವೆಸ್ಟ್ ವರ್ಜಿನಿಯಾ ವಿಶ್ವವಿದ್ಯಾಲಯದ ಸಂಶೋಧಕರು ಕಂಡುಕೊಂಡಿದ್ದಾರೆ.


ವಾಷಿಂಗ್ಟನ್: ಸರ್ವ ರೋಗ ನಿವಾರಿಸುವ ಸಾಮರ್ಥ್ಯ ಭಾರತೀಯ ಸಂಗೀತಕ್ಕೆ ಇದೆ ಎನ್ನುವುದು ಸುಳ್ಳಲ್ಲ. ಹೌದು, ಕೀರ್ತನ ಕ್ರಿಯಾ ಎಂಬ ಪುರಾತನ ಧ್ಯಾನ ತಂತ್ರವು ಮೆದುಳಿನ ಕಾರ್ಯವನ್ನು ಚುರುಕುಗೊಳಿಸುವುದರ ಜತೆಗೆ ವಯಸ್ಸಾದವರಲ್ಲಿ ಕಂಡು ಬರುವ ಮರವಿನ ಕಾಯಿಲೆ (ಆಲ್ಜೀಮರ್ ಕಾಯಿಲೆ) ನಿವಾರಿಸಲು ನೆರವಾಗುತ್ತದೆ ಎಂದು ಅಧ್ಯಯನದ ವರದಿಯೊಂದು ತಿಳಿಸುತ್ತಿದೆ.
ಕೀರ್ತನ ಕ್ರಿಯೆ ಎನ್ನುವುದು ಧ್ಯಾನದ ಒಂದು ಪ್ರಕಾರವಾಗಿದ್ದು, ಬೆರಳುಗಳ ಪುನರಾವರ್ತಿತ ಚಲನೆಯೊಂದಿಗೆ ಹಾಡುವುದಾಗಿರುತ್ತದೆ.ಸಾಮಾನ್ಯವಾಗಿ ಹಿರಿಯರಲ್ಲಿ ಕಂಡು ಬರುವ ಮರವಿನ ಕಾಯಿಲೆ ನಿವಾರಿಸಲು ಸರಳ ಧ್ಯಾನಾಭ್ಯಾಸ ಅಥವಾ ಸಂಗೀತ ಚಿಕಿತ್ಸೆ ಸಹಕಾರಿಯಾಗುತ್ತದೆ ಎಂದು ಅಮೆರಿಕದ ವೆಸ್ಟ್ ವರ್ಜಿನಿಯಾ ವಿಶ್ವವಿದ್ಯಾಲಯದ ಸಂಶೋಧಕರು ಕಂಡುಕೊಂಡಿದ್ದಾರೆ.
'ಜರ್ನಲ್ ಆಫ್ ಆಲ್ಜೀಮರ್ಸ್ ಡಿಸೀಸ್‌'ನಲ್ಲಿ ಪ್ರಕಟವಾಗಿರುವ ಅಧ್ಯಯನದ ಪ್ರಕಾರ, ಸರಳ ಧ್ಯಾನ ಅಥವಾ ಸಂಗೀತ ಚಿಕಿತ್ಸೆಯೂ ನೆನಪಿನ ಶಕ್ತಿ, ಗ್ರಹಣ ಶಕ್ತಿ, ನಿದ್ರೆ, ಮನಸ್ಥಿತಿ ಹಾಗೂ ಜೀವನ ಗುಣಮಟ್ಟ ಸುಧಾರಣೆಗೆ ನೇರವಾಗಿ ಸಂಬಂಧಿಸಿರುತ್ತದೆ ಎಂದು ತಿಳಿಸಲಾಗಿದೆ.
ಸಂಶೋಧನೆ ಸಂಬಂಧ ಮರುವಿನ ಕಾಯಿಲೆ ಇರುವ 60 ಜನರನ್ನು ಕೀರ್ತನ ಕ್ರಿಯಾ ಅಥವಾ ಸಂಗೀತ ಕೇಳುವ ಧ್ಯಾನದಲ್ಲಿ ತೊಡಗಿಸಲಾಗಿದ್ದು, 12 ವಾರಗಳ ಕಾಲ 12 ನಿಮಿಷ ಧ್ಯಾನ ಮಾಡುವಂತೆ ತಿಳಿಸಲಾಗಿತ್ತು. ನಿಗದಿತ ಸಮಯ ಮುಕ್ತಾಯವಾದ ಬಳಿಕ ಇವರಲ್ಲಿ ಹಲವು ಬದಲಾವಣೆಯಾಗಿರುವುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ.

Comments

Popular posts from this blog

ಪ್ರಕೃತಿಯ ಮಡಿಲಿನಲ್ಲಿ ಅರಳಿದ 'ಬನವಾಸಿ': ಡಾ. ರತ್ನಾಕರ ಮಲ್ಲಮೂಲೆ ಅವರ ಪರಿಸರ ಪ್ರೇಮಕ್ಕೊಲಿದ 'ವನಮಿತ್ರ' ಪ್ರಶಸ್ತಿ

ಎಚ್ಚರಿಕೆ: ವಿಂಡೋಸ್ 10 ಇನ್ನು ಮುಂದೆ ಸುರಕ್ಷಿತವಲ್ಲ! ವಿಂಡೋಸ್ 10 ಬೆಂಬಲ ಸ್ಥಗಿತ: ನಿಮ್ಮ ಮುಂದಿನ ಹೆಜ್ಜೆ ಏನು?

Is Your Password on This List? The 20 Most Common Leaks of 2026 ⁉️